ಆ ದಿನಗಳು :- Aa Dinagalu (Kannada)
ನಾನು,ನಿತಿನ್ ಕೃಷ್ಣ ಎಂ,ನಿತಿನ್ ಕ್ರಿಶ್-ಉಪೇಂದ್ರ - ಬಾಬ್ -ಅವೆಂಜೆರ್ ನಿತಿನ್ - ಕವಿ -MLA ಮುಂತಾದ ಹೆಸರುಗಳಲ್ಲೂ ಕೆಲವರು ಕರೀತಾರೆ.ಆದರೆ ಇತ್ತೀಚೆಗೆ, ದೇವದಾಸ್ - ಸೂಸೈಡ್ - ಶೂಟ್ ಎಂದು.ಪ್ರತಿ ನಿಮಿಷವೂ ಸಾಯುವ ಯೋಚನೆ.ನನ್ನಿಂದಾ ಯಾರಿಗೂ ಸುಖವಿಲ್ಲ ಎಂಬ ಯಾತನೆ.ಎಂದೋ ಸತ್ತವ, ಎಷ್ಟು ಬಾರಿಯಂತ ಸಾಯಲಿ."ಸಾವು ಅನ್ನೋದು ಎಷ್ಟು ಭಯಾನಕ!ಎಷ್ಟು ಭಯಂಕರ!ಇನ್ನೊಂದು ಮಾತಿನ ಪ್ರಕಾರ, ಎಷ್ಟು ಏಡಿತನ!ಸಾಯುವ ಮುನ್ನ ನಿನ್ನ ತಂದೆ ತಾಯಿ ಜವಾಬ್ದಾರಿಗಳ ಬಗ್ಗೆ ಯೋಚಿಸು, ಜೀವನ ತುಂಬಾ ದೊಡ್ಡದು."ಪ್ರತೀ ಬಾರಿ "ನಾ ಸಾಯುವೆ" ಎಂದು ಹೇಳಿದವರಿಗೆ ನಾ ಹೇಳುತ್ತಿದ್ದ ಬುದ್ಧಿ ಮಾತಿದು.ಆದರೆ ನನಗೇ ಇಂದು ಇಂತಹ ಯೋಚನೆಗಳು ಬರುತ್ತಿವೇ ಎಂದರೆ!ಕನಸಿನಲ್ಲೂ ನಾ ಇಷ್ಟರ ಮಟ್ಟಿನ ಖಿನ್ನತೆಗೆ ಒಳಗಾಗುವೆ ಎಂದು ಎಂದೂ ಊಹಿಸಿರಲಿಲ್ಲ ಬಿಡಿ.ಕಾರಣ!?ಆರ್ಥಿಕ ಸಮಸ್ಯೆ? ಅಲ್ಲವೇ ಅಲ್ಲ.ತಂದೆ ಎಂಜಿನೀರ್, ಸವಕಾರರಲ್ಲದಿದ್ದರು, ಸಾಲಗಳು ಕೊಂಚ ಜಾಸ್ತಿಯಿದ್ದರೂ, ಊಟ - ಬಟ್ಟೆಗೆ ಕೊರತೆಯಿಲ್ಲ.ಪ್ರೇಮ ವೈಫಲ್ಯ? ನನಗೆ ತಿಳಿದಿಲ್ಲ.ನನ್ನ ಮನಸ್ಸಿನ ಪ್ರಕಾರ,…